Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 20 January 2025

ಯಲ್ಲಾಪುರದಲ್ಲಿ ಕುಮಾರವ್ಯಾಸ ಜಯಂತಿ ಸಂಭ್ರಮ

ಯಲ್ಲಾಪುರ: ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕುಮಾರವ್ಯಾಸ ಜಯಂತಿಯನ್ನು ಶಿರಸಿ ರಸ್ತೆಯ ಸಂಸ್ಕೃತಿ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ ಅವರ ಮಾರ್ಗದರ್ಶನದಲ್ಲಿ ಗಾಯತ್ರಿ ಬೋಳಗುಡ್ಡೆ, ಸರೋಜಾ ಪ್ರಶಾಂತ್ ಹೆಗಡೆ, ಶಂಕರ್ ಭಟ್ಟ, ಆಶಾ ರವಿ ಬಗನಗದ್ದೆ, ಅಂಬಿಕಾ ಭಟ್ಟ ಮೊದಲಾದವರು ಕುಮಾರವ್ಯಾಸ ಭಾರತದ ಸುಪುತ್ರ ಕಲ್ಯಾಣ ಜರಾಸಂಧ ಭಾಗದ ಆಯ್ದ ಪದ್ಯಗಳನ್ನು ಸುಂದರವಾಗಿ ವಾಚಿಸಿದರು. ಜಾನವಿ ಎಸ್ ಮಣ್ಮನೆ, ರಚನಾ ಹೆಗಡೆ, ವಿಜಯಶ್ರೀ ಹೆಗಡೆ, ಸಂದ್ಯ ಕೊಂಡದಕುಳಿ, ಮಮತಾ ಪ್ರಕಾಶ್ ,ಮೊದಲಾದವರು ಪದ್ಯಗಳನ್ನು ಸಮರ್ಥವಾಗಿ ವ್ಯಾಖ್ಯಾನಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಎಂ.ಎನ್. ಹೆಗಡೆ ಹಳವಳ್ಳಿ,, ಪ್ರಮೋದ ಹೆಗಡೆ, ಶಾಂತಲಾ ಹೆಗಡೆ, ಮಾದೇವಿ ಭಟ್ಟ, ಶೈಲಶ್ರೀ ಭಟ್ಟ, ಆಶಾ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.